ದೇಶದಲ್ಲಿ ಎಲ್ಲವೂ ದುಬಾರಿಯಾಗಿದೆ. ಗ್ರಾಹಕರು ಅಸಮಧಾನಗೊಂಡಿದ್ದಾರೆ. ಕನಿಷ್ಠ ವರ್ತಕರು ಅಥವಾ ರೈತರಿಗಾದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ ತೆರಿಗೆ ಹೆಸರಿನಲ್ಲಿ ಲೂಟಿ ಮಾಡುತ್ತಿದೆ. ಅದರಿಂದ ದರ ಏರಿಕೆಯಾಗಿ ಜನ ಬೆಲೆ ಹೆಚ್ಚಳದಿಂದ ತತ್ತರಿಸುವಂತಾಗಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.