ಮನೆಯ ಹೆಂಚು ತೆಗೆದು ತೆಂಗಿನಕಾಯಿಗೆ ಬೆಂಕಿ ಹಾಕಿದ ದುಷ್ಕರ್ಮಿಗಳು

ನಾಗಮಂಗಲ: ಮನೆಯ ಹೆಂಚು ತೆಗೆದು ರಾಸಾಯನಿಕ ಬಳಸಿ ದುಷ್ಕರ್ಮಿಗಳು ತೆಂಗಿಕಕಾಯಿಗೆ ಬೆಂಕಿ ಹೊತ್ತಿಸಿರುವ ಘಟನೆ ತಾಲ್ಲೂಕಿನ ಕಸಬಾ ಹೋಬಳಿ ದೊಡ್ಡಬಾಲ ಗ್ರಾಮದಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ 11 ಗಂಟೆ ಸಮಯದಲ್ಲಿ ಗ್ರಾಮದ ಹುಚ್ಚೇಗೌಡ ಎಂಬುವರ ಮನೆಯ ಹೆಂಚನ್ನು ತೆಗೆದು ಅಟ್ಟದ ಮೇಲಿದ್ದ ತೆಂಗಿನಕಾಯಿಗೆ ಬೆಂಕಿ ಹಾಕಲಾಗಿದೆ.

ಮನೆಯಲ್ಲಿ ಎಲ್ಲರೂ ಮಲಗಿದ್ದಾಗ ಘಟನೆ ನಡೆದಿದ್ದು, ಅಂದಾಜು 4.95 ಲಕ್ಷ ಆಸ್ತಿ ನಷ್ಟವಾಗಿದೆ. 12 ಸಾವಿರ ಮೌಲ್ಯದ ಕೊಬ್ವರಿ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಧಗಧಗಿಸಿ ಕೊಬ್ಬರಿ ಉರಿದ ಪರಿಣಾಮ ದಟ್ಟ ಹೊಗೆಯು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿತು.

Post a Comment

0 Comments